‘ದ. ಕ. ಜಿ. ಪ. ಸ.ಹಿ. ಪ್ರಾ. ಶಾಲೆ ಕೊಳ್ತಿಗೆ’ಯಲ್ಲಿ ‘ವಿದ್ಯಾಮಾತಾ ಅಕಾಡೆಮಿ’ ಮತ್ತು ‘ಗಾಂಧಿ ವಿಚಾರ ವೇದಿಕೆ’ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ.
ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ‘ವಿದ್ಯಾಮಾತಾ ಅಕಾಡೆಮಿ’ ಮತ್ತು ‘ಗಾಂಧಿ ವಿಚಾರ ವೇದಿಕೆ’ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗಾಂಧಿ ವಿಚಾರ ವೇದಿಕೆಯ ಪುತ್ತೂರು ತಾಲೂಕು ಅಧ್ಯಕ್ಷರಾದ ಝೇವಿಯರ್ ಡಿ’ಸೋಜಾರವರು “ನಮ್ಮ ದೇಶ- ನಮ್ಮ ಬಾವುಟ” ವಿಚಾರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತನುಜಾ ಝೇವಿಯರ್ ರವರು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪುತ್ತೂರು ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಯಾದ ನವೀನ್ ಭಂಡಾರಿರವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಿ, ಕರ್ನಾಟಕ ಸರಕಾರದ ಶಾಲೆಗಾಗಿ “ನಾವು – ನೀವು ” ಯೋಜನೆಯಡಿಯಲ್ಲಿ “ನಮ್ಮ ಶಾಲೆ ಕೊಳ್ತಿಗೆ” ಘೋಷಣೆಯೊಂದಿಗೆ ವಿದ್ಯಾಮಾತಾ ಫೌಂಡೇಶನ್ ಈ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತಿರುವುದರ ಬಗ್ಗೆ ಅಭಿನಂದಿಸಿ ಸರಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಿಸುವುದರ ಬಗ್ಗೆ ಆಶ್ವಾಸನೆ ನೀಡಿದರು.
![](https://gvv-info.yehoshua.faith/wp-content/uploads/2022/08/1WhatsApp-Image-2022-08-14-at-21.29.00-1024x683.jpg)
![](https://gvv-info.yehoshua.faith/wp-content/uploads/2022/08/2WhatsApp-Image-2022-08-14-at-21.29.01-1024x682.jpg)
![](https://gvv-info.yehoshua.faith/wp-content/uploads/2022/08/3WhatsApp-Image-2022-08-14-at-21.29.01-1024x682.jpg)
![](https://gvv-info.yehoshua.faith/wp-content/uploads/2022/08/WhatsApp-Image-2022-08-14-at-21.29.00-1024x682.jpg)
ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಲಾಯಿತು ಮತ್ತು ವಿದ್ಯಾಮಾತಾದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡೆಯನ್ನು ಮತ್ತು ದೈಹಿಕ ಸದೃಢತೆಗೆ ಬೇಕಾಗುವ ಕ್ರೀಡಾ ಚಟವಟಿಕೆಗಳಿಗೆ ಪೂರಕವಾದ ಸಾಮಗ್ರಿಗಳನ್ನು ನೀಡಲಾಯಿತು. ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಶಾಲೆಯನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಎಲ್ಲರ ಸಹಕಾರವನ್ನು ಕೋರಿದರು.
ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಜನಾರ್ದನ್, ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ, ಸ್ಥಳೀಯರಾದ ಗಂಗಾಧರ್ ಗೌಡ, ಅಮಳ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.