ಎಪ್ರಿಲ್ 1 ರಂದು ಸಂಜೆ 4.30 ಕ್ಕೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ಕಾರ್ನಾಡ್ ಸದಾಶಿವ ರಾಯರ ಕುರಿತ ಅರವಿಂದ ಚೊಕ್ಕಾಡಿಯವರು ಬರೆದ ಪುಸ್ತಕದ ಬಿಡುಗಡೆಯಾಗಲಿದೆ.

ಇದಕ್ಕೊಂದು ಮಹತ್ವ ಇದೆ.‌ ಬೆಂಗಳೂರು, ಬಿಜಾಪುರ, ಧಾರವಾಡ, ಬೆಳ್ತಂಗಡಿ, ಮೈಸೂರು, ಡೆಲ್ಲಿಯಲ್ಲೆಲ್ಲ ಅರವಿಂದ ಚೊಕ್ಕಾಡಿಯವರ ಪುಸ್ತಕ ಬಿಡುಗಡೆಯಾಗಿದೆ. ಆದರೆ ಅವರು ವಾಸವಾಗಿರುವ ಮೂಡುಬಿದಿರೆಯಲ್ಲಿ ಈವರೆಗೆ (March 2023) ಒಂದು ಪುಸ್ತಕವೂ ಬಿಡುಗಡೆಯಾಗಿಲ್ಲ.

ಬರೆವಣಿಗೆಯನ್ನು ಪ್ರಾರಂಭಿಸುವ ಕಾಲಕ್ಕೆ ಅವರ ಜೀವನದ ಅತೀ ಹೆಚ್ಚಿನ ಅವಧಿ ಅಂದರೆ ಹನ್ನೊಂದು ವರ್ಷ ಒಂದೇ ಊರಲ್ಲಿ ಬಾಳಿದ್ದೆಂದರೆ ಚೊಕ್ಕಾಡಿಯಲ್ಲಿ.‌ ಮತ್ತೆ ಸುಬ್ರಾಯ ಚೊಕ್ಕಾಡಿಯವರ ಹೆಸರೂ ಇತ್ತು.‌ ಇನಿಷಿಯಲ್ ಹಾಕಿಕೊಂಡರೂ ಅದರಲ್ಲಿ ತಂದೆಯ ಹೆಸರಿನೊಂದಿಗೆ ಜಾತಿ ಬರುತ್ತದೆ. ಆದ್ದರಿಂದ ಹೆಸರಿನ ಜೊತೆ ‘ ಚೊಕ್ಕಾಡಿ’ ಸೇರಿಕೊಂಡಿತು. ಈಗ ಚೊಕ್ಕಾಡಿಗಿಂತಲೂ ಜಾಸ್ತಿ ಕಾಲ ಅಂದರೆ 20 ವರ್ಷಗಳಿಂದ ಮೂಡುಬಿದಿರೆಯ ಖಾಯಂ ನಿವಾಸಿ. ಇದು ಮೂಡುಬಿದಿರೆಯಲ್ಲೆ ಬಿಡುಗಡೆಯಾಗುತ್ತಿರುವ ಮೊದಲ ಪುಸ್ತಕ.

ಎಲ್ಲ‌ ಪುಸ್ತಕಗಳೂ ಬಿಡುಗಡೆಯಾಗುವುದಿಲ್ಲ.‌ ಇದೂ ಆಗುತ್ತಿರಲಿಲ್ಲ. ಆದರೆ ದಸರಾ ಉತ್ಸವಕ್ಕೆ ಸಮಾಜ ಮಂದಿರಕ್ಕೆ ಹೋಗಿದ್ದಾಗ ಏನೋ ಮಾತಾಡುತ್ತಿದ್ದಾಗ ಕಾರ್ನಾಡ್ ಸದಾಶಿವ ರಾಯರ ಬಗ್ಗೆ ಪುಸ್ತಕ ಬರೆಯುತ್ತಿದ್ದೇನೆ ಎಂದಿದ್ದರು. ಆಗ ಸಮಾಜ ಮಂದಿರದ ಅಧ್ಯಕ್ಷರಾದ ಶ್ರೀ ಕೆ. ಅಭಯಚಂದ್ರ ಜೈನ್ ಅವರು ಅದನ್ನು ನಾವೇ ಬಿಡುಗಡೆ ಮಾಡುವ ಎಂದರು. ಅಭಯ ಚಂದ್ರರು ಈ ಪ್ರಸ್ತಾವನೆಯನ್ನು ಇಡದಿದ್ದರೆ ಈ ಬಿಡುಗಡೆ ಕಾರ್ಯಕ್ರಮ‌ ಇರುತ್ತಿರಲಿಲ್ಲ. ನಂತರ ಇದರ ಪೂರ್ತಿ ಜವಾಬ್ದಾರಿ ನಿರ್ವಹಿಸುತ್ತಿರುವುದು ಡಾ. ಪುಂಡಿಕಾಯ್ ಗಣಪಯ್ಯ ಭಟ್ ಅವರು.

ಪುಸ್ತಕ ಬಿಡುಗಡೆಯ ಅಧ್ಯಕ್ಷತೆ ಶ್ರೀ ಕೆ. ಅಭಯಚಂದ್ರ ಜೈನ್ ಅವರು.‌ಬಿಡುಗಡೆ ಡಾ. ನಾ. ಮೊಗಸಾಲೆಯವರು. ಪುಸ್ತಕ ಪರಿಚಯ ಡಾ.‌ಪುಂಡಿಕಾಯ್ ಗಣಪಯ್ಯ ಭಟ್ ಅವರಿಂದ.‌ ಕಾರ್ನಾಡ್ ಸದಾಶಿವ ರಾಯರ ಕೊಡುಗೆಗಳಲ್ಲಿ ಅವರ ತಾಯಿ, ಪತ್ನಿ, ಮಗಳಂದಿರ ಪಾತ್ರ ಬಹಳವಿದೆ.‌ ಈ ಬಗ್ಗೆ ಉಡುಪಿಯ ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.‌ಸುಕನ್ಯಾ ಮೇರಿ ಜೆ ಅವರು ಮಾತನಾಡುತ್ತಾರೆ.

ಕಾರ್ನಾಡ್ ಸದಾಶಿವ ರಾಯರ ಕುರಿತ ಅರವಿಂದ ಚೊಕ್ಕಾಡಿಯವರು ಬರೆದ ಪುಸ್ತಕದ ಬಿಡುಗಡೆ.

Leave a Reply

Your email address will not be published. Required fields are marked *